Monday, June 25, 2012

ಸರ್ವೇಜನಾಃ ಸುಖಿನೋ ಭವಂತು ಎಂದರೆ ಕೇಸರೀಕರಣವೇ?

ಕೆಲವು ದಿನಗಳಿಂದ ಉದಯವಾಣಿ ಪತ್ರಿಕೆಯಲ್ಲಿ ಬರುತ್ತಿರುವ ’ಕೇಸರಿ ಕಲಹ’ದಲ್ಲಿ ಗಣ್ಯರ ಅಭಿಪ್ರಾಯಗಳನ್ನು ಓದಿದಾಗ ಪ್ರತಿಕ್ರಿಯಿಸಬೇಕು ಎಂದೆನಿಸಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತಿ ಮತ್ತು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಿ ನೋಡಿದ ಉದಾಹರಣೆಗಳು ಬಹಳ ಕಡಿಮೆ. ಇದರ ಭಾಗವೇ ಕೇಸರೀಕರಣದ ಪರ ಮತ್ತು ವಿರೋಧ ಚರ್ಚೆ. ಈ ನಿಟ್ಟಿನಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ನಮ್ಮ ರಾಜಕಾರಣೆಗಳಿಗೆ ಕೇಳಬಯಸುತ್ತೇನೆ.
·    ಮೊದಲನೆಯದಾಗಿ, ಹಸಿರು ಎಂದರೆ ಗಿಡ, ಮರ, ಪರಿಸರವನ್ನು ನೆನಪಿಸಿಕೊಳ್ಳುವ ನೀವು ಕೇಸರಿ ಎಂದಾಕ್ಷಣ ಸಂಕುಚಿತ ಮನೋಭಾವದವರಾಗುವುದೇಕೆ ಮತ್ತು ಪೂರ್ವಾಗ್ರಹ ಪೀಡಿತರಂತೆ ವರ್ತಿಸುವುದೇಕೆ? ಅಷ್ಟಕ್ಕೂ ಕೇಸರಿಗೆ ಕೇವಲ ಧರ್ಮವೊಂದನ್ನು ಹೊಂದಿಸಿ ನೋಡುವ ನಿಮ್ಮ ಮನೋಧರ್ಮ ಸರಿಯೇ?
·      ಸರ್ವೇಜನಾಃ ಸುಖಿನೋ ಭವಂತು ಮತ್ತು ವಸುಧೈವ ಕುಟುಂಬಕಂ ಎಂಬ ಉಕ್ತಿಗಳ ಅರ್ಥವಾದರೂ ನಿಮಗೆ ತಿಳಿದಿದೆಯೇ? ಸಮಸ್ತರಿಗೆ ಸುಖ ಮತ್ತು ಶಾಂತಿ ಸಿಗಲಿ ಎಂಬುದು ನಿಮ್ಮ ಪ್ರಕಾರ ಸಂಕುಚಿತ ಮನಸ್ಥಿತಿಯಾದರೆ, ವಿಶಾಲ ಮನಸ್ಸು ಎಂದರೆ ಏನು ಎಂದು ತಿಳಿಸುವಿರಾ?
· ಸಮಾನತೆಯೇ ನಿಮ್ಮ ಗುರಿಯಾದರೆ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುತ್ತಿರುವುದೇಕೆ? ಅಲ್ಪಸಂಖ್ಯಾತರೆಂದು ಕೆಲವು ವರ್ಗಕ್ಕೆ ವಿಶೇಷ ಸೌಲಭ್ಯ ನೀಡುವುದು ಸರಿಯೇ?
·  ಸಮಾಜದ ಒಂದು ವರ್ಗಕ್ಕೆ ನೋವಾಗುತ್ತದೆ ಎಂದು ಐತಿಹಾಸಿಕ ಸತ್ಯಗಳನ್ನೇ ತಿರುಚುವುದು ಸರಿಯೇ?
ನಮ್ಮಲ್ಲಿನ ಎಲ್ಲಾ ರಾಜಕೀಯ ಪಕ್ಷಗಳೂ ಜಾತಿ ಮತ್ತು ಧರ್ಮವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿವೆಯೇ ಹೊರತು ಅವರ ಮೇಲಿನ ನೈಜ ಕಾಳಜಿಯಿಂದಲ್ಲ. ಸಮಾಜದಲ್ಲಿ ಒಡಕು ಮೂಡಿಸುವ ಮೂಲಕ ತಮ್ಮ ಕಾರ್ಯ ಸಾಧಿಸುವ ರಾಜಕಾರಣಿಗಳ ಆಟವನ್ನು ತಿಳಿಯದಷ್ಟು ದಡ್ಡರಲ್ಲ ನಮ್ಮ ಜನ.

No comments:

Post a Comment