Sunday, June 24, 2012

ರಾಜಕೀಯ


ಕಾನೂನು ಸಚಿವ ಸುರೇಶ್ ಕುಮಾರ್ ಮೇಲಿನ ಆರೋಪ ಮತ್ತು ಅವರ ರಾಜೀನಾಮೆ ಕರ್ನಾಟಕ ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ.
ಗಂಧದ ಗುಡಿ, ಶಿಲ್ಪಕಲೆಯ ತವರೂರು ಎಂಬೆಲ್ಲಾ ವಿಶೇಷಣಗಳಿಂದ ಕರೆಸಿಕೊಳ್ಳುತ್ತಿದ್ದ ನಮ್ಮ ನಾಡು ಇಂದು ರಾಜಕೀಯ ಗೊಂದಲಗಳ ಗೂಡು. ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾದುದನ್ನು ನಾವು ಕಂಡಿದ್ದೇವೆ. ಈ ಬದಲಾವಣೆಗಳು ನಮ್ಮ ಹಿರಿಯರು ರಾಜ್ಯಕ್ಕೆ ತಂದು ಕೊಟ್ಟ ಎಲ್ಲಾ ಗೌರವವನ್ನು ಮಣ್ಣುಪಾಲಾಗಿಸಿದೆ. ಗಣಿಯ ಧೂಳು ಎಷ್ಟು ತೊಳೆದರೂ ಹೋಗುತ್ತಿಲ್ಲ. ಮಕ್ಕಳಿಗೆ ಸಿಹಿತಿಂಡಿ ಹಂಚಿದಂತೆ ರಾಜಕಾರಣಿಗಳಿಗೆ ಸೈಟ್ ಹಂಚಿಕೆಯಾಗಿದೆ. ದಿನಾಲು ಹಗರಣಗಳು ಟಿವಿ ಧಾರಾವಾಹಿಯಂತೆ ಹೊರಗೆ ಬರುತ್ತಿದೆ. ಆದರೆ ಈಗ ಕೇಳಿಬರುತ್ತಿರುವ ಹೆಸರು ಬಿಜೆಪಿಯ ಕೆಲವೇ ಪ್ರಾಮಾಣಿಕ ಸಚಿವರಲ್ಲಿ ಒಬ್ಬರಾದ ಸುರೇಶ್ ಕುಮಾರ್. ಇವರು ಪ್ರಾಮಾಣಿಕರು ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಕಂಡಾಗ ಈ ಆರೋಪ ಉಳಿದ ಸಚಿವರ ಮೇಲಿನ ಆರೋಪಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಈಗಲೇ ಸುರೇಶ್ ಕುಮಾರ್ ಯಾವುದೇ ಅಕ್ರಮ ಎಸಗಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಅವಸರದ ಕ್ರಮ. ಆದರೆ ಒಂದು ವೇಳೆ ಅವರು ಪ್ರಾಮಾಣಿಕರೇ ಆಗಿದ್ದಲ್ಲಿ ಅವರ ರಾಜೀನಾಮೆ ಕರ್ನಾಟಕದ ಜನತೆಗೆ ಆದ ನಷ್ಟ ಎಂದೆನಿಸುತ್ತದೆ. ಆದುದರಿಂದ ತಾನು ಪ್ರಾಮಾಣಿಕ ಎಂಬ ಆತ್ಮಸ್ಥೈರ್ಯ ಅವರಲ್ಲಿ ಇದ್ದರೆ ಸುಳ್ಳು ಆರೋಪಗಳಿಗೆ ಅವರು ಅಂಜಬೇಕಾಗಿಲ್ಲ ಮತ್ತು ಅವರು ಅಧಿಕಾರದಲ್ಲಿ ಮುಂದುವರಿಯಲು ಅರ್ಹರು. ಅಲ್ಲದೆ ದಕ್ಷ ಮತ್ತು ಪ್ರಾಮಾಣಿಕ  ರಾಜಕಾರಣಿಗಳ ಸೇವೆ ನಮಗೆ ಅಗತ್ಯ ಕೂಡ.

No comments:

Post a Comment